ಕೆರಿಯಮ್ಮ ಸ್ಕೂಲ್ ಬಿಟ್ಟಿದ್ದು ..!!!
ಊರಿಗೊಬ್ಳೆ ನಳಿನಾಕ್ಷಿ ಅನ್ನೊ ತರ ಆಡ್ತ ಇದ್ಲು. ಅಹಂಕಾರ ಅನ್ನೋದು ಅವಳ್ ಮೈ ರಕ್ತದಲ್ಲಿ ಅವರಪ್ಪ ಕೊಟ್ಟ ಬಳುವಳಿ. ಅವರಪ್ಪಾನು ಹಾಗೆ ಊರಿಗೊಬ್ನೆ ಈರಪ್ಪ ಅನ್ನೊ ತರ ಅಡ್ಥ ಇದ್ದ. ತಾನು ಎಲ್ಲರಿಗಿಂತ ರೂಪಸಿ ಅಂದ ಚೆಂದದಲ್ಲಿ ತನ್ನ ಸೋಲ್ಸೋರಿಲ್ಲ ಅನ್ನೊ ದುರಹಂಕಾರ ಅವಳ ರಕ್ತದಲ್ಲೆ ಮನೆ ಮಾಡಿತ್ತು. ಅದ್ರೇನ್ ಬಂತು ಅವರಪ್ಪ ಕತರ್ನಾಕ್ ಹೆಸರಿಟ್ಟಿದ್ದ ಕೆರಿಯಮ್ಮ ಅಂತ ಹಹಹ..ಅಯ್ಯೋ ಬಿಡಿ ಹೆಸರಲ್ಲೇನಿದೆ ಅಲ್ಲವ? ಅದ್ರು ಅವಳಿಗಿರೊ ರೂಪಕ್ಕೆ ಅಷ್ಟೋಂದು ಹಾರಾಡ್ತ ಇದ್ದೋಳು ಅವಳಿಗಿರೊ ಹೆಸರಿಗದ್ರು ಸ್ವಲ್ಪ ತನ್ನ ಅಹಂಕಾರವನ್ನ ಕಮ್ಮಿ ಮಡಿಕೊಂಡಿದ್ರೆ ಒಳ್ಳೇದಿತ್ತು ಅಲ್ಲವ? ಅದೆ ಅವಗ್ಲೆ ಹೇಳಿದ್ನಲ್ಲ? ಅವರಪ್ಪನ್ ದರಿದ್ರೆ ರಕ್ತ ಇತ್ತು ಅದ್ಕೆ ಹಾಗೆ ಅಡ್ತ ಇದ್ಲು ಅನ್ಸುತ್ತೆ ಅವರಪ್ಪಾನು ಹಾಗೆ ಎಷ್ಟ್ ಮನೆ ಬೇಲಿಹಾರಿದ್ನೋ ದೇವರಿಗೆ ಗೊತ್ತು ಅದೇನೊ ಹೇಳ್ತಾರಲ್ಲ ಕಲಿಯುಗದ ಶ್ರೀ ಕ್ರಿಷ್ಣ ಅಂತ ಹಾಗ್ ಆಡ್ತ ಇದ್ದ ಕಚ್ಚೆ ಹರುಕ ಬಡ್ಡಿ ಮಗ..ಊರ ಹೆಂಗಸರಲ್ಲಿ ತನ್ನ್ ಹೆಂಡ್ರು ಹುಡುಕೊ ಬಡ್ಡಿ ಮಗ ಅವನು.ಅವನ್ ಹೆಸರು ಹಂಗೆ ಇತ್ತು ಬಿಡಿ ಗುತ್ಯಪ್ಪ ಅಂತ ಹಹಹ ಅಯ್ಯೋ ಬಿಡಿ ಹೆಸರಲ್ಲೇನಿದೆ ಅಲ್ಲವ? ಆದ್ರು ಒಂದು ಮಾತು ಕಣ್ರಿ ಮಗಳು ಮಾತ್ರ ಸಕತ್ತು ಅಂದ್ರೆ ಸಕತ್ತು….ಹಹಹಹಹಹ
ನಮ್ ಶಾಲೆನಲ್ಲೂ ಅಷ್ಟೆ ಕಣ್ರಿ ಅವಳು ಕೂರೊ ಜಾಗದಲ್ಲಿ ಉಫ಼್ ಅಂತ ಹತ್ತು ಸಲ ಬಾಯಿಂದ ಗಾಳಿ ಊದಿಸ್ಕೊಂಡು ಕೂರ್ತ ಇದ್ಲು. ಅವಳ ಮೈ ಗೆ ಹುಡುಗರಿರಲಿ ಹುಡುಗೀರು ಕೂಡ ತಾಗಿಸೋ ಹಾಗಿರ್ಲಿಲ್ಲ ಕುವ್ ಅಂತ ಕುನ್ನಿ ತರ ಆಡೋಳು. ನಾವ್ ಬಿಡಿ ಅವಾಗ ಸ್ನಾನ ಮಾಡೋದೆ ವಾರಕ್ಕೆರೆಡು ಸಲ ಮತ್ತೆ ನಮಗೆ ಇದ್ದಿಲು ಬಿಟ್ರೆ ಹಲ್ಲುಜ್ಜೋಕೆ ಬೇರೆ ಗತಿ ಇರ್ಲಿಲ್ಲ ಆದ್ರೆ ಇವಳು ಸ್ನಾನ ಮಾಡೊದಿಕ್ಕೆ ಲೇಟ್ ಆಯ್ತು ಸಾ….ಹಲ್ಲುಜ್ಜೋಕೆ ಲೇಟ್ ಆಯ್ತು ಸಾ……..ಅಂತ ನುಲ್ಕೋತ ಬರೋಳು ಶಾಲೆಗೆ . ಅಷ್ಟೆ ಅಲ್ಲ ಕಣ್ರಿ ನಮ್ಮೂರಲ್ಲಿ ಅವಗ ಪೆಸ್ಟ್ ಸಿಗ್ಥ ಇರ್ಲಿಲ್ಲ ಆದ್ರೆ ಅವರಪ್ಪನ ಕೈನಲ್ಲಿ ಪಕ್ಕದೂರಿನಿಂದ ಅಜಂತಾ ತೂಥ್ ಪೇಸ್ಟ್ ನ ತರ್ಸೋಳು. ಅವಳ ಗತ್ತು ಎಷ್ಟಿತ್ತು ಅಂದ್ರೆ ನಮಗೆಲ್ಲ ಕಣೋ ಹಾಗೆ ಮನೆ ಮುಂದೆ ಬಂದು ಹಲ್ಲುಜ್ಜೋಳು. ಅದರ ಅರ್ತ ನೋಡ್ರೋ ಮುಂಡೆ ಮಕ್ಕಳ ನಾನ್ ಬ್ರಷ್ ನಲ್ಲಿ ಹಲ್ಲುಜ್ಜುತ್ತ ಇದ್ದಿನಿ ನಿಮ್ ತರ ಕರಿ ಇದ್ದಿಲಲ್ಲಿ ಅಲ್ಲ ಅಂತ ತೋರ್ಸೋ ನರಿ ಬುದ್ದಿ ಅವಳದ್ದು…ನಾವ್ ಬಿಡಿ ಅವಳ ಬಾಯಿಂದ ಬರೋ ನೊರೆನ ಒಳ್ಳೆ ಹಾಲಿನ್ ಕೆನೆ ಏನೋ ಅನ್ನೋತರ ನೋಡ್ತ ಇದ್ವಿ….
ಒಂದು ದಿನ ಇದ್ದಕ್ಕಿದ್ದ ಹಾಗೆ ಶಾಲೆನಲ್ಲಿ ಗೋಳೋ ಅಂತ ಅಳೋಕೆ ಶುರು ಮಾಡಿದ್ಲು. ಅವಳ ಸ್ಟೈಲ್ ಹೇಗಿತ್ತು ಅಂದ್ರೆ ಅತ್ಲಾಗೆ ಅತ್ತ ಹಾಗು ಅಲ್ಲ ನಕ್ಕ ಹಾಗು ಅಲ್ಲ. ನಾವೆಲ್ಲ ಏನಾಗೋಯ್ತಪ್ಪ ಅಂತ ಕೊಕ್ಕೋ ಆಟ ಆಡ್ತ ಇದ್ದೋರು ಓಡಿ ಬಂದ್ವಿ. ಒಂದೆ ಸಮನೇ ಅಳ್ತ ಕೂತಿದ್ಲು. “ಪುಣ್ಯಾತ್ಗಿತ್ತಿ ಏನ್ ಆಯ್ತಮ್ಮ” ಅಂತ ಕೇಳಿದ್ರೂ ಹೇಳ್ತ ಇಲ್ಲ ಸುಮ್ಮೇ ಅಳ್ತ ಕೂತಿದ್ಲು. ಹುಡುಗೀರೆಲ್ಲ ’ಕೆರಿ ಎನ್ ಆಯ್ತೆ ಕೆರಿ’ ಅಂತ ಕೇಳ್ತ ಇದ್ರೆ ಇವಳೂ ಅಳೋದು ನಿಲ್ಲಿಸ್ಲಿಲ್ಲ. ಸರಿ ಅಂತ ನಾವು ಸುಮ್ಮನಾದ್ವಿ. ಇವಳು ಅಳೋದ್ ಯಾಕೋ ಜಾಸ್ತಿ ಆಯ್ತು ಪಕ್ಕದ ಕೊಣೆಯಲ್ಲಿದ್ದ ಪಿ ಟಿ ಮೇಸ್ಟ್ರು ಬಂದು ಕೇಳಿದ್ರು “ಯಾಕೆ ಕೆರಿ ಎನಾಯ್ತು ಹೇಳಮ್ಮ” ಅಂದಿದ್ದಕ್ಕೆ ..” ಸಾ… ಸಾ… ನನಗ್ಯಾರೋ ಲವ್ ಚೀಟಿ ಬರ್ದವ್ರೇ ಸಾರ್ ನಮ್ಮಪ್ಪುಗ್ ಗೊತ್ತಾದ್ರೆ ನನ್ ಕೆರೆನಲ್ಲ್ ಮುಳುಗುಸ್ ಬುಡ್ತಾನೆ ಸಾ…. ” ಅಂದ್ಲು… ನಮಗೆಲ್ಲ ತಲೆ ಕೆಟ್ಟೋಯ್ತು ಯಾರಪ್ಪ ಬರೆದವರು ಅಂತ.. ಬರೆದವನಾದ್ರು ಎನ್ ಬರೆದಿದ್ದ ಅಂತೀರಿ? ಅವನು ಬರೆದಿದ್ದು ಇಷ್ಟೆ…..[ ಕೆರಿಯಮ್ಮ ನಿನ್ನ ಕಂಡ್ರೆ ನಂಗೆ ಬಾಳ ಇಷ್ಟ ,ನೀನು ನೊಡಾಕೆ ಚೆಂದಾಕಿದ್ದಿಯ] ಅಷ್ಟೆ ಕಣ್ರಿ ಅವನು ಬರೆದಿದ್ದು. ಪುಣ್ಯಾತ್ಮ ಅವನು ಯಾರು ಇಲ್ಲದ ಸಮಯ ನೋಡಿ ಬರೆದಿಟ್ಟು ನಮ್ ಗುಂಪ್ನಲ್ಲೆ ಅರಾಮಗಿದ್ದ ಬಡ್ಡಿ ಮಗ.
ಅಬ್ಬ ಯಾವನಾದ್ರು ಮಂತ್ರಿ ಸತ್ರೆ ನಮ್ ದೇಶಕ್ಕೆ ಅಷ್ಟು ಬೇಗ ಗೊತ್ತಗುತ್ತೋ ಇಲ್ಲವೊ … ಆದ್ರೆ ಕೆರಿಯಮ್ಮಗೆ ಲವ್ ಲೆಟರ್ ಬರೆದಿದ್ದು ಸುದ್ದಿ ಆಗೋಯ್ತು. ಅಕ್ಕ ಪಕ್ಕದ ಊರಲ್ಲೆಲ್ಲ ಇದೇ ಮಾತು. ಯಾಕಂದ್ರೆ ಅವತ್ತಿನ ಮಟ್ಟಿಗೆ ಹಳ್ಳಿ ಕಡೆ ಲವ್ವು ಡವ್ವು ಹುಡುಗ ಹುಡುಗಿ ಗುಸ ಗುಸ ಪಿಸ ಪಿಸ ಅನ್ನೊದು ಒಟ್ಟಿಗೆ ನಿಂತು ಮಾತಾಡೊದು ಅವತ್ತಿನ ಮಟ್ಟಿಗೆ ನಿಶಿದ್ದ. ಈಗ ಬಿಡಿ ನಮ್ ಹಳ್ಳೀ ಹೈಕಳು ಪ್ಯಾಟೆ ಹುಡುಗ್ರನ್ನ ಮೀರುಸ್ತಾರೆ. ಸರಿ ಎಲ್ಲ ವಿಷ್ಯ ಗೊತ್ತಯ್ತು. ತಗಾಳಪ್ಪ ಅವರಪ್ಪ ಮಾರನೆ ದಿನ ಶಾಲೇಗೆ ಬಂದು ಬಿಟ್ಟ “ಯಾವನಲೆ ಮಿಂಡ್ರಿಗುಟ್ಟುದೋನು ನನ್ ಮಗಳಿಗೆ ಲವ್ ಚೀಟಿ ಬರದವ್ನು .. ಯಾವನಂತ ಹೇಲ್ರೊ ಕಳ್ ಸೂಳೆ ಮಕ್ಳ ನಮ್ಮಮ್ಮುನ್ನ್ ಆಣೆ ನಮ್ ಊರು ಬೂತಪ್ಪನ ಮೇಲಾಣೆ ಅವ್ನ್ ನಾನ್ ಸುಮ್ನೆ ಬಿಡಾದಿಲ್ಲ ಮಾರಿ ಹಬ್ಬುಕ್ ಬಲಿ ಕೊಡ್ತಿನಿ ಕಳ್ಳ್ ರಂಡೆ ಮಗುನ್ನ” ಅಂತ ಬಾಯ್ ಬಡ್ಕೊತಾನೆ ಇದ್ದ. ಅವನನ್ನ ಸಮಧಾನ ಮಾಡಿ ಮನೆಗೆ ಕಳಿಸೋಸ್ಟ್ರಲ್ಲಿ ನಮ್ ಮೆಷ್ಟ್ರುಗಳಿಗೆ ಉಸ್ಸಪ್ಪೊ…!!!!
ಪುಣ್ಯಾತ್ಗಿತ್ತಿ ಸುಮ್ನೆ ಕೂರ್ತ ಇದ್ಲು …ಯಾವಗ ಮಾಸ್ಟ್ರು ಪಾಟ ಮಾಡೊಕ್ ಬಂದ್ರು ಅವಗ ಅಳೋಕೆ ಶುರುಮಾಡೋಳು.ಸರಿ ಮಾಸ್ಟು ಯಾವನಲೆ ಬರೆದವನು ಅಂತ ಎಲ್ಲಾರ್ನು ಎಬ್ಸಿ ನಿಲ್ಸಿದ್ರು. ಯಾರ್ ಒಪ್ಕೋತಾರೆ? ನಾವಲ್ಲ್ಲ ಸಾ… ನಾವಲ್ಲ ಸಾ… ಇದೋಂದೆ ಹೇಳ್ತಾ ಇದ್ರು. ಸರಿ ನಿನಗೆ ಯಾರ ಮೇಲಾದ್ರು ಅನುಮಾನ ಐತೇನಮ್ಮ? ಅಂತ ಕೇಳಿದ್ದಕ್ಕೆ… ” ಅದೆ ಸಾ……..ಈಸುರಣ್ಣನ ಮಗ[ನಮ್ ಅಪ್ಪ] ಸೋಮ ಮ್ಯಾಲೆ ಐತೆ.ಅವನೊಬ್ನೆ ಕನ್ನಡನ ಇಷ್ಟು ದುಂಡುಗೆ [ಸುಂದರವಾಗಿ] ಬರಿಯಾದು ಅವನೆ ಸಾ……. ಅವನೆ ಬರ್ದವನೆ ” ಅಂದೆ ಬಿಡೋದ?…ಅವಳು ಹೇಳಿದ್ದೆ ತಡ ಮುಖ ಮೂತಿ ನೋಡದೆ ನಾಲ್ಕು ಬಾರಿಸಿ ಬಿಟ್ರು…”ಯಾಕಲೆ ಹಿಂಗೆ ಮಾಡ್ ದೆ ಸೋಮ ನಿನ್ ಒಳ್ಳೆ ಹುಡುಗ ಅಂನ್ಕಂಡಿದ್ನಲ್ಲೋ” ಅಂದ್ರು ಅದ್ಕೆ…’ ಸಾ…. ನಮ್ಮ್ಮವ್ವುನ್ ಮೇಲಾಣೆ ಸಾ…ನಾನ್ ಬರ್ದಿಲ್ಲ ನಮ್ ಅಪ್ಪುನ್ ಮ್ಯಾಲಾಣೆ ಸಾ…” ಕೆರಿಯಮ್ಮಗಿಂತ ಜಾಸ್ತಿ ಅಳೋಕೆ ಶುರು ಮಾಡಿದೆ ಅವತ್ತು ಎಲ್ಲರ ಮುಂದೆ ನಾನು ಇದ್ದ ಪರಿಸ್ತಿತಿನ ನೆನೆಸಿಕೊಂಡ್ರೆ ಇಅವ್ತ್ತು ಅಯ್ಯೋ ಸೋಮ ಅನ್ಸುತ್ತೆ..!!
ಆದ್ರೆ ಅವರಪ್ಪ ಬಿಡಬೇಕಲ್ಲ..೨ ದಿನ ಬಿಟ್ಟು ಬಂದ .ಬಂದವನ ಕೈನಲ್ಲಿ ಒಂದು ತೆಂಗಿನ ಕಯಿ ಇತ್ತು. ಅವನೇನ್ ಸಾಮಾನ್ಯದವನಲ್ಲ ಬಿಡಿ..ಸೀದ ಹೋಗಿ ಅವನು ಸಿಗಂದೂರಿ ಗೆ ಹೋಗಿ ತೆಂಗಿನ ಕಾಯಿನ ಪೂಜೆ ಮಾಡಿಸಿಕೊಂಡು ಬಂದಿದ್ದ. [ ಸಿಗಂದೂರು ಅನ್ನೋದು ನಮ್ಮ ಕಡೆ ಒಂದು ಪವಿತ್ರವದ ದೇವರ ಸನ್ನಿದಿ ಅಲ್ಲಿ ಪೂಜೆ ಮಾಡಿಸಿಕೊಂಡು ಬಂದ ತೆಂಗಿನ ಕಾಯಿ ದೇವರ ಸಮಾನ ಅದನ್ನ ಮುಟ್ಟಿ ಸುಳ್ಳು ಹೇಳೋದಕ್ಕೆ ಯಾರು ಸಿದ್ದರಿರಲಿಲ್ಲ. ಈಗಲು ಕೂಡ]… ಬಂದವನೆ ಯಾವನಲೇ ಮಿಂಡ್ರಿಗುಟ್ಟುದೋನು ಮುಟ್ರುಲಾ ತೆಂಗಿನ ಕಾಯಿನ ಅಂದವನೆ ಕ್ಲಾಸೊಳಗೆ ಬಂದ. ಸರಿ ಎಲ್ಲಾರು ಮುಟ್ರಪ್ಪ ಅಂತ ಮಾಸ್ಟ್ರು ಕೂಡ ಹೇಳಿದ್ರು. ಎಲ್ಲಾರು ಮುಟ್ಕೋತ ಬಂದ್ರು ನನ್ ಸರದಿ ಬಂತು….” ನೋಡು ಗುತ್ಯಣ್ಣ ನಮ್ ತಾಯಾನೆ ಈ ಸಿಗಂದೂರ್ ಅಮ್ಮನ ಮೇಲಾಣೆ ಕೆರಿ ಗೆ ಲವ್ ಚೀಟಿ ಬರೆದವ್ನು ನಾಲ್ ಅಲ್ಲ” ಅಂತ ಹೇಳಿ ೨ ಸಲ ಮುಟ್ಟಿದೆ. ಅವತ್ತು ನೋಡಬೇಕಿತ್ತು ಅವಳ ಮುಖಾ ನ….! ಸರಿ ಕೊನೆಗೆ ನಮ್ ಕ್ಲಾಸಿನ್ ಗಣೇಶ ಮುಟ್ಟೊಕ್ ಹೆದುರೋಕೆ ಶುರು ಮಡಿದ ಬಲವಂತ ಮಾಡಿದ್ದಕ್ಕೆ ” ಇನ್ ಮ್ಯಾಗೆ ಹಂಗೆ ಮಡಲ್ಲ ಸಾ………… ತಪ್ಪಾತು ಸಾ……. ನಾನೆ ಸಾ…. ಬರೆದಿದ್ದು” ಅಂತ ಒಪ್ಕೊಂಡು ಬಿಟ್ಟ. ಹಡ್ಸಿ ಮಗನೆ ಅಂದವ್ನು ಗಣೇಶನ ಕುತ್ಗೆಗೆ ಕೈ ಹಾಕಿ ಹಿಡ್ಕೊಂಡ್ ಬಿಟ್ಟ ಅವತ್ತು ಅವನ ಕೈನಲ್ಲಿ ಬಿಡ್ಸಿದ್ದು ನಮ್ ಗಣೇಶ ಗೆ ಪುನರ್ಜನ್ಮ ಸಿಕ್ಕ ಹಾಗೆ ಆಗಿತ್ತು ಪಾಪ …
ಸರಿ ಅದೆಲ್ಲ ಗಲಾಟೆ ಮುಗಿತು . ನಮ್ ಶಾಲೆ ಇಂದ ಪ್ರವಾಸ ಹೋಗೋಕೆ ಅಂತ ಪ್ಲಾನ್ ಹಾಕಿದ್ರು. ” ಯಾರ್ ಯಾರ್ ಬರ್ತಿರ ” ಅಂತ ಮಾಸ್ಟ್ರು ಕೇಳಿದ್ದೆ ತಡ ” ನಾನ್ ಬರ್ತಿನಿ ನಮ್ ಅಪ್ಪ ದುಡ್ ಕೊಡ್ತಾನೆ ” ಅಂತ ಮೊದ್ಲು ಎದ್ ನಿಂತೋಳೆ ನಮ್ ಕೆರಿಯಮ್ಮ… ಹಹಹಹಹ.. ಸರಿ ನಮ್ಮ್ ಶಾಲೆ ಇಂದ ೩೪ ಜನ ಹೊರಟ್ವಿ ಪ್ರವಾಸಕ್ಕೆ ಅಂತ ಆಗುಂಬೆ ಹೊರನಡು ಕಳಸ.. ಹೀಗೆ ಸ್ವಲ್ಪ ಊರುಗಳಿಗೆ ಪ್ರವಾಸ ಹೋಗೋದು ಅಂತ ತೀರ್ಮಾನ ಆಯ್ತು.ಅವತ್ತು ನೋಡಬೇಕಿತ್ತು ಕೆರಿಯಮ್ಮನ ಅವತಾರ ನ ಅದೇನ್ ವಯ್ಯಾರ ಅದೇನ್ ಸಿಂಗಾರ ಅಬ್ಬ ಅದೇ ಹೇಳಿದ್ನಲ್ಲ ಊರಿಗೊಬ್ಳೆ ನಳಿನಾಕ್ಷಿ ಅಂತ ಹಾಗೆ.. ಅಪ್ಪ ಪಕ್ಕ ಕೂತೋರ್ ಮೇಲೆಲ್ಲ ಕುಯ್ ಅನ್ನೋಳು. ಟೂರ್ ಹೋದಲ್ಲೆಲ್ಲ ಅವಳದೇನ್ ಕರೀದಿ ಅಂತೀರಿ? ಅಬ್ಬ ನಮಗೆ ಸುಸ್ತಾಗಿ ಹೋಗಿತ್ತು ನಾವ್ ಟೂರ್ ಕರ್ಚಿಗೆ ನಲವತ್ತು ಐವತ್ತು ರೂಪಾಯಿ ತಗೊಂಡು ಹೋದ್ರೆ ಅವಳು ಅವಾಗಿನ್ ಕಾಲಕ್ಕೆ ಅವಳು ೫೦೦ ರೂಪಾಯಿ ತಂದಿದ್ಲು..! ಒಬ್ಬರಿಗೆ ಒಂದು ರೂಪಾಯ್ ಕೇಳಿದ್ರು ಕೊಡ್ತ ಇರ್ಲಿಲ್ಲ ದುರಹಂಕಾರಿ. ಸರಿ ಎಲ್ಲ ಊರು ಸುತ್ತಾಡಿಕೊಂಡು ಮನೆ ಕಡೆ ನಮ್ ವ್ಯಾನು ಬರ್ಥ ಇತ್ತು ೩೪ ಜನ ನ ಒಳ್ಳೆ ಕುರಿ ತುಂಬಿದ ಹಾಗೆ ತುಂಬಿದ್ರು ..ಅಷ್ಟರಲ್ಲಿ ಏನೋ ವಾಸನೆ ಬರೋಕೆ ಶುರು ಆಯ್ತು. ಎಲ್ಲ ಹುಡುಗ ಹುಡುಗಿ ಸಾ,,,,, ಸ,,,,, ಅನ್ನೋಕೆ ಶುರು ಮಾಡಿದ್ರು.. ” ಎನ್ರಪ್ಪ ನಿಮ್ ಗಲಾಟೆ ” ಅಂತ ಕೇಳಿದ್ದಕ್ಕೆ ನಮ್ ಗಣೇಶ ” ಸಾ.. ಎನೋ ವಾಸನೆ ಬರ್ತ ಇದೆ ಸಾ…” ಅಂದ..ಅದಕ್ಕೆ ನಮ್ಮ ಮಾಸ್ಟ್ರು ” ಲೋ ಸೋಮ ಅದೇನು ನೋಡಲ ಸ್ವಲ್ಪ ಅಂತ ಹೇಳಿ ವ್ಯಾನ್ ನಿಲ್ಲಿಸೋಕೆ ಹೇಳಿದ್ರು. ಸರಿ ನನ್ ಎಲ್ಲಾರ್ನು ಕೆಳಗಿಳಿಸೋಕೆ ಶುರು ಮಾಡಿದೆ.. ಆದ್ರೆ ವೀಣ ವಿಜಯ ಮತ್ತೆ ನಮ್ ಕೆರಿಯಮ್ಮ ಮಾತ್ರ ಇಳಿತಾ ಇಲ್ಲ..”ವೀಣ ವಿಜ್ಯ ಈಕಡೆ ಬನ್ರೆ” ಅಂತ ಹೇಳಿದ್ದಕ್ಕೆ ” ಏನು ಇಲ್ಲ ಬಿಡು ಸೋಮ” ಅಂತ ಹೇಳಿದ್ರು….. ನಾನ್ ಬಿಡಬೇಕಲ್ಲ ಅವರನ್ನ ಬಲವಂತವಗಿ ವ್ಯಾನ್ ಇಂದ ಇಳಿಸಿದೆ.. ಇನ್ನು ಉಳಿದವಳು ಕೆರಿಯಮ್ಮ ಅವಳ ಕಡೆಯಿಂದಾನೆ ಕೆಟ್ಟ ವಾಸನೆ ಬರ್ತ ಇತ್ತು. ಹತ್ತಿರ ಹೋದೋನೆ..ಜೋರಾಗಿ ಕೂಗೋಕೆ ಶುರು ಮಾಡಿದೆ………. ಸಾ……………………. ಕೆರಿಯಮ್ಮ ಹೇತ್ಕೋಂಡಿದ್ದಾಳೆ ಸಾ……ಕೆರಿಯಮ್ಮ ಹೇತ್ಕೋಂಡು ಬಿಟ್ಟಿದ್ದಾಳೆ ಸಾ……………. ಅಂತ
ಅಷ್ಟೆ. ಆ ಹುಡುಗಿ ಶಾಲೆಯ ಕಡೆ ಮುಖ ಕೂಡ ಹಾಕಲಿಲ್ಲ. ನಮ್ಮೂರಿಂದ ಸ್ವಲ್ಪಾನೆ ದೂರ ಇರುವ ಅವಳ ಮನೆಗೆ ನಮ್ಮ ಶಾಲೆ ಹುಡುಗ ಹುಡುಗಿಯರೆಲ್ಲ ಹೋಗಿ ಕರೆದ್ರು ಅವಳು ಶಾಲೆಗೆ ಬರಲೆ ಇಲ್ಲ ನಮ್ಮ ಮಾಸ್ಟು ಕೂಡ ಅವಳ ಮನೆಗೇನೆ ಹೋಗಿ ಕರೆದ್ರು ಆದ್ರು ಕೆರಿಯಮ್ಮ ಬರಲೆ ಇಲ್ಲ. ನಾನು ಮಾಡಿದ್ದು ತಪ್ಪು ಅಂತ ಇವತ್ತು ನನಗೆ ಅನ್ನಿಸ್ತ ಇರ್ಬೋದು ಆದರೆ ಅವತಿನ ನಮ್ಮ ಹುಡುಗಾಟದ ಜೀವನದಲ್ಲಿ ಇದ್ಯಾವದನ್ನು ಗಣನೆಗೆ ತೆಗೆದುಕೊಳ್ಳಲೇ ಇಲ್ಲ ..ಒಂದು ಹುಡುಗಿಯ ವಿದ್ಯಾಭ್ಯಾಸವನ್ನ ಹಾಳು ಮಾಡೊಕೆ ನಮ್ಮ ಅವತ್ತಿನ ಹುಡುಗಾಟ ಕಾರಣವಯಿತು. ೩ ವರ್ಶದ ಹಿಂದೆ ಊರಿಗೆ ಹೋದಾಗ ” ನನ್ ಮದ್ವಿ ಇದೆ ಸೋಮ ನೀನ್ ಬರ್ಬೇಕು ನೋಡು” ಅಂತ ಪ್ರೀತಿ ಇಂದ ಕರೆದಿದ್ಲು ಕೆರಿಯಮ್ಮ. ಹೊಗೋಕ್ ಆಗ್ಲಿಲ್ಲ.. ಹೋದ ವರ್ಶ ತಂಗಿ ಪೋನ್ ಮಾಡಿ “ಅಣ್ಣ ಕೆರಿಯಮ್ಮ ಗೆ ಗಂಡು ಮಗು ಅಂತೆ ಕಣೊ ಮಗು ಹೆಸರು ಬಸಪ್ಪ ಅಂತೆ ” ಅಂದ್ಲು !! ಅನ್ಕೊಂಡೇ ಚೆ ಈ ಕೆರಿಯಮ್ಮ ಫ಼್ಯಾಮಿಲಿಗೆ ಹೆಸರಿಡೋಕೆ ಬರಲ್ಲವ? ಅಪ್ಪುನ್ ಹೆಸರು ಗುತ್ಯಪ್ಪ ಅಮ್ಮ ದಾನಮ್ಮ ಇವಳು ಕೆರಿಯಮ್ಮ ಮಗ ಬಸಪ್ಪ….. ಗಂಡನ ಹೆಸರು ಕಾಳಪ್ಪ…..ಅಯ್ಯೋ ಬಿಡಿ ಹೆಸರಲ್ಲೇನಿದೆ ಅಲ್ಲವ?



