——————————————————–
ಶೆಟ್ಟರ ಅಂಗಡಿಯಲ್ಲಿ ಶಾಪಿಂಗ್ ಮಾಡುತ್ತಿದ್ದ ಗಂಡನಿಗೆ, ತನ್ನ ಹೆಂಡತಿಯ ಗಲ್ಲದ ನೆನಪಾಗಿ, ನಾಚಿ ನೀರಾಗಿ, ಬೆಲ್ಲ ತರುವುದು ಮರೆತುಬಿಟ್ಟ.
——————————————————–
ಅಮ್ಮನಿಗೀಗಾಗಲೇ ಅರ್ಜೆಂಟ್ ಕಾಶಿಗೆ ಹೋಗಬೇಕಾಗಿದೆ. ದೇವರ ಮನೆಯಲ್ಲಿರುವ ಹಳೆಯ ಡಬ್ಬಿಗೆ ಅಗಾಗ ಒಂದೆರೆಡು ರೂಪಾಯಿಗಳನ್ನ ತುಂಬುತ್ತಿದ್ದಾಳೆ ಅದರೂ ತುಂಬುತ್ತಿಲ್ಲ..ಮಗ ಎಮ್ ಎನ್ ಸಿ ಕಂಪನಿಯ ನೌಕರನಂತೆ.
——————————————————–
ನಾಲ್ಕು ಹೆಜ್ಜೆಗಳು ಒಟ್ಟಿಗೆ ಹೋಗಬೇಕು ಅಂತ ಎರೆಡು ಹೆಜ್ಜೆಗಳು ಬಯಸಿದ್ದವು. ಎರೆಡು ಹೆಜ್ಜೆಗಳು
ಒಪ್ಪಲಿಲ್ಲ.ಕೊನೆಗೆ ನಾಲ್ಕೂ ಹೆಜ್ಜೆಗಳು ಅನಾಥವಾದವಂತೆ.
——————————————————–
ಗೆಳೆಯ ಗೆಳತಿ ಬೆಟ್ಟು ಕಟ್ಟಿದರು.ಚಳಿಗಾಲ ಬೆಚ್ಚಗಿರುತ್ತೆ ಅಂದ ಗೆಳೆಯ ಬೆಟ್ಟು ಗೆದ್ದುಬಿಟ್ಟ.
——————————————————–
ಒಂದು ಕತೆಯ ಪಾತ್ರಕ್ಕೆ ನ್ಯಾಯ ಸಿಕ್ಕಿಲ್ಲವಂತೆ. ನ್ಯಾಯಕ್ಕಾಗಿ ಕಾದಂಬರಿಕಾರನ ಹತ್ತಿರ ಧರಣಿ ಕೂತಿದೆ. ಕಾದಂಬರಿಕಾರ ತನ್ನ ತಾನು ಸಂತೈಸಿಕೊಳ್ಳುತ್ತಿದ್ದಾನೆ.
———————————————————
ಪ್ರೇಮಿಗಳು ಮದುವೆಯಾದರು.ಮದುವೆಯಾಗಲು ಕಾರಣರಾದ ಎಲ್ಲರನ್ನು ನೆನೆಸಿಕೊಂಡು
ಕೃತಜ್ನತೆ ಅರ್ಪಿಸಿದರು. ಆದರೆ ಯಾಕೋ ನಾಲ್ಕೂ ಕಣ್ಣುಗಳು ಧಾರಾಕಾರವಾಗಿ ಅಳುತಿದ್ದವು.
———————————————————
ಅವಳ ಗೆಜ್ಜೆ ಸದ್ಧು ಮದುವೆಯ ಮೊದಲು ಹೇಗೆ ಕೇಳಿಸುತ್ತಿತೋ ಈಗ ಹಾಗೆಲ್ಲ ಕೇಳಿಸುತ್ತಿಲ್ಲವಂತೆ.
ಗೆಜ್ಜೆ ತೆಗೆದಿಟ್ಟು ಮನೆಯಲ್ಲಿ ಒಡಾಡಬಾರದ ಅಂದು ಸಿಡುಕುತ್ತಿದ್ದಾನೆ.
———————————————————
ಒಂದೂರಲ್ಲಿ ಒಂದು ಹುಡುಗನಿದ್ದ. ಮದುವೆಯಾದ. ಒಂದು ತಿಂಗಳು ಹನಿಮೂನು ಮುಗಿಸಿಕೊಂಡುಬಂದ.
ಅದೇ ಊರಿನಲ್ಲಿ ಒಂದು ಮುದ್ದಾದ ಹುಡುಗಿ.ಆ ಹುಡುಗಿಯ ಆತ್ಮಕ್ಕೂ ಒಂದು ತಿಂಗಳಾಗಿತ್ತು.
———————————————————-
ಇದು ನಿನಗೆ ನಾನು ಬರೆಯುತ್ತಿರುವ ಕೊನೆಯ ಪತ್ರ ಅನ್ನುವ ಪತ್ರ ಅವಳಿಗೆ ಸಿಕ್ಕಿದ್ದು ಒಂದರ ಹಿಂದೊಂದು ಜೋಡಿಸಿಟ್ಟ ಅವನ ೫೦೦ ಪ್ರೇಮ ಪತ್ರಗಳ ಅಡಿಯಲ್ಲಂತೆ.
———————————————————–
ಅವನು ಡಿವೋರ್ಸ್ ತಗೊತೀನಿ ಅಂತ ತಮಾಷೆಗೆ ಅಂದ. ಇವಳು ದೇವರ ಮುಂದೆ ಹಣತೆ ಹಚ್ಚಿಟ್ಟು
ನಿಜಕ್ಕೂ ಅತ್ತಿದ್ದಳೂ ಅನ್ನುವುದಕ್ಕೆ ಸಾಕ್ಷಿಯಾಗಿ ಹಣತೆಯಾರಿತ್ತು.ಅಲ್ಲಿ ಅವಳ ಕಣ್ಣೀರಿತ್ತು
(ವಿಜಯ-ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)
December 22, 2008 at 7:35 am
ನಾಲ್ಕು ಹೆಜ್ಜೆಗಳು ಒಟ್ಟಿಗೆ ಹೋಗಬೇಕು ಅಂತ ಎರೆಡು ಹೆಜ್ಜೆಗಳು ಬಯಸಿದ್ದವು. ಎರೆಡು ಹೆಜ್ಜೆಗಳು ಒಪ್ಪಲಿಲ್ಲ.ಕೊನೆಗೆ ನಾಲ್ಕೂ ಹೆಜ್ಜೆಗಳು ಅನಾಥವಾದವಂತೆ
ಒಂದೂರಲ್ಲಿ ಒಂದು ಹುಡುಗನಿದ್ದ. ಮದುವೆಯಾದ. ಒಂದು ತಿಂಗಳು ಹನಿಮೂನು ಮುಗಿಸಿಕೊಂಡುಬಂದ. ಅದೇ ಊರಿನಲ್ಲಿ ಒಂದು ಮುದ್ದಾದ ಹುಡುಗಿ.ಆ ಹುಡುಗಿಯ ಆತ್ಮಕ್ಕೂ ಒಂದು ತಿಂಗಳಾಗಿತ್ತು
ಗೆಳೆಯ ಗೆಳತಿ ಬೆಟ್ಟು ಕಟ್ಟಿದರು.ಚಳಿಗಾಲ ಬೆಚ್ಚಗಿರುತ್ತೆ ಅಂದ ಗೆಳೆಯ ಬೆಟ್ಟು ಗೆದ್ದುಬಿಟ್ಟ.
tumba ishtavayithu somanna chennagi barediddiya
December 22, 2008 at 8:30 am
ellavu sakt aagive tumba esht aaitu somu avre,
December 22, 2008 at 9:15 am
somu,
chennagide kanri
maansige thumba atrivagohage baredidira
” ಒಂದೂರಲ್ಲಿ ಒಂದು ಹುಡುಗನಿದ್ದ. ಮದುವೆಯಾದ. ಒಂದು ತಿಂಗಳು ಹನಿಮೂನು ಮುಗಿಸಿಕೊಂಡುಬಂದ.
ಅದೇ ಊರಿನಲ್ಲಿ ಒಂದು ಮುದ್ದಾದ ಹುಡುಗಿ.ಆ ಹುಡುಗಿಯ ಆತ್ಮಕ್ಕೂ ಒಂದು ತಿಂಗಳಾಗಿತ್ತು.” 3 bari oddida mele artavayitu
its really good da
CREATIVE BOY KEEP IT UP
December 22, 2008 at 12:15 pm
Somaa , tumba tumba sakhathagive kano …
“ಇದು ನಿನಗೆ ನಾನು ಬರೆಯುತ್ತಿರುವ ಕೊನೆಯ ಪತ್ರ ಅನ್ನುವ ಪತ್ರ ಅವಳಿಗೆ ಸಿಕ್ಕಿದ್ದು ಒಂದರ ಹಿಂದೊಂದು ಜೋಡಿಸಿಟ್ಟ ಅವನ ೫೦೦ ಪ್ರೇಮ ಪತ್ರಗಳ ಅಡಿಯಲ್ಲಂತೆ.”….
aahahahha tumba tumba sakhttaada saalu .. [:)]
December 22, 2008 at 12:44 pm
Somuravare
Chutukaagidharu, acchukattagidhe….
Tumba arthagarbithavaagidhe….
Shubhavaagali
Jai Karnataka
December 23, 2008 at 4:01 am
“ಗೆಳೆಯ ಗೆಳತಿ ಬೆಟ್ಟು ಕಟ್ಟಿದರು.ಚಳಿಗಾಲ ಬೆಚ್ಚಗಿರುತ್ತೆ ಅಂದ ಗೆಳೆಯ ಬೆಟ್ಟು ಗೆದ್ದುಬಿಟ್ಟ.
ಇದು ನಿನಗೆ ನಾನು ಬರೆಯುತ್ತಿರುವ ಕೊನೆಯ ಪತ್ರ ಅನ್ನುವ ಪತ್ರ ಅವಳಿಗೆ ಸಿಕ್ಕಿದ್ದು ಒಂದರ ಹಿಂದೊಂದು ಜೋಡಿಸಿಟ್ಟ ಅವನ ೫೦೦ ಪ್ರೇಮ ಪತ್ರಗಳ ಅಡಿಯಲ್ಲಂತೆ.
ನಾಲ್ಕು ಹೆಜ್ಜೆಗಳು ಒಟ್ಟಿಗೆ ಹೋಗಬೇಕು ಅಂತ ಎರೆಡು ಹೆಜ್ಜೆಗಳು ಬಯಸಿದ್ದವು. ಎರೆಡು ಹೆಜ್ಜೆಗಳು
ಒಪ್ಪಲಿಲ್ಲ.ಕೊನೆಗೆ ನಾಲ್ಕೂ ಹೆಜ್ಜೆಗಳು ಅನಾಥವಾದವಂತೆ.”
ಇವು ಮೂರೂ ಸಾಲುಗಳಿಗೆ ಫಿದಾ ಆಗಿಬಿಟ್ಟಿದೀನಿ ಗುರುಗಳೇ..:)
December 24, 2008 at 2:49 pm
ಕತೆಯೆಂದರೆ ಕಾಡಬೇಕು.. ಕಾಡಿಕಾಡಿ ಮನದಲ್ಲಿ ಅಳಿಯದೇ ಉಳಿಯಬೇಕು.. ಉಳಿದ ನಂತರವೂ ಇನ್ನೆಲ್ಲೋ ಬೆಳೆಯಬೇಕು.. ಅದು ನೀಲ್ಗತೆಯಿರಬಹುದು, ಮಿನಿ ಕತೆಯಿರುಬಹುದು, ಹನಿ ಕತೆಯಿರಬಹುದು..
ಇನ್ನಷ್ಟು ಹನಿ ಕತೆಗಳ ಸುಗ್ಗಿ ನಿರೀಕ್ಷಿಸುವ ಕನಸುಗಾರ ನಾನು.
December 25, 2008 at 2:21 pm
ella kathegalu chennagive adrallu ನಾಲ್ಕು ಹೆಜ್ಜೆಗಳು ಒಟ್ಟಿಗೆ ಹೋಗಬೇಕು ಅಂತ ಎರೆಡು ಹೆಜ್ಜೆಗಳು ಬಯಸಿದ್ದವು. ಎರೆಡು ಹೆಜ್ಜೆಗಳು ಒಪ್ಪಲಿಲ್ಲ.ಕೊನೆಗೆ ನಾಲ್ಕೂ ಹೆಜ್ಜೆಗಳು ಅನಾಥವಾದವಂತೆ very touching, meaningful….
December 26, 2008 at 5:48 am
ರೋಹಿಣಿ..ನೀನ್ ಕಾಮೆಂಟ್ ಮಾಡೋವಾಗಲೆಲ್ಲ ಕೇವಲ ಇದೇ ತರ ಸಾಲುಗಳು ನಿಂಗೆ ಯಾಕೆ ಇಷ್ಟು ಇಷ್ಟ ಆಗ್ತಾವೆ? ಏನಾದ್ರು ಸಮ್ ಥಿಂಗ್ ಸಮ್ ಥಿಂಗ್?
December 26, 2008 at 5:49 am
ಥಾಂಕು ಡಿಯರ್ ಪ್ರಾಣೇಶ್..:)
December 26, 2008 at 5:50 am
ರಂಜು ಅಂಡ್ ಲಿಂಗರಾಜಣ್ಣ… ನಿಮ್ ಮೇಲು ನನಗೆ ಯಾಕೋ ಸ್ವಲ್ಪ ಅನುಮಾನ ಹಹಹಹಹಹಹ ಯಾಕೆ ನಿಮಗೂ ಇದೇ ಸಾಲುಗಳು ಇಷ್ಟ ಆಯ್ತು?
ಏನಾದ್ರೂ……………………..
ಏನಿಲ್ಲ ಬಿಡಿ…
ದನ್ಯವಾದ
December 26, 2008 at 5:52 am
ಜೈ ಕರ್ನಾಟಕ ಮಾತೆ ಹೆಹೆಹೆಹೆಹೆ ದನ್ಯವಾದ ಗುರುಗಳೇ..:)
ನೀಲಿಹೂವಿನ ಒಡೆಯರಿಗೆ ಅನಂತ ಅನಂತ ಧನ್ಯವಾದಗಳು ಹಿಹಿಹಿಹಿಹಿ ನನಗೆ ಗೊತ್ತು ಬಿಡಿ ನಿಮಗೆ ಯಾವ್ ಯಾವ್ ಸಾಲು ಇಷ್ಟ ಆಗುತ್ವೆ ಅಂತ..;)
December 26, 2008 at 5:53 am
ನಟೇಶ್ ಜೀ..ನಿಮ್ ಕಾಮೆಂಟೇ ಒಂದೊಳ್ಳೇ ಕವಿತೆ ತರ ಇದೆ.. ನಿಮಗೆ ತುಂಬಾ ಪ್ರೀತಿಯಿಂದ ಥಾಂಕು ಥಾಂಕು ಹೇಳ್ತೀನಿ..:) ನಿಮ್ಮ ಬರವಣಿಗೆ ಮತ್ತು ನಿಮ್ಮ ಬ್ಲಾಗ್ ಕೂಡ ಚನ್ನಾಗಿದೆ.. ಆಗಾಗ ಭೇಟಿ ಕೊಡ್ತ ಇರಿ
ಪ್ರೀತಿಯಿಂದ ನಿಮ್ ಹುಡುಗ
ಸೋಮ
December 26, 2008 at 5:55 am
ವಿನೋದಣ್ಣ..ನನಗೂ ಇದೊಂದೆ ಸಾಲು ಇಷ್ಟವಾಗಿದ್ದು.. ನವಿಲ್ಗರಿ ಕಡೆ ಅವಗವಾಗ ಕಾಣಿಸ್ತ ಇರಿ..;)
ನಿಮ್ ಹುಡುಗ
ಸೋಮ
March 3, 2009 at 1:36 pm
Ondu salu kathegalu oduvdake saral.Aadre bhala kata koduttave.
March 13, 2009 at 3:03 pm
ಒಂದೂರಲ್ಲಿ ಒಂದು ಹುಡುಗನಿದ್ದ. ಮದುವೆಯಾದ. ಒಂದು ತಿಂಗಳು ಹನಿಮೂನು ಮುಗಿಸಿಕೊಂಡುಬಂದ.
ಅದೇ ಊರಿನಲ್ಲಿ ಒಂದು ಮುದ್ದಾದ ಹುಡುಗಿ.ಆ ಹುಡುಗಿಯ ಆತ್ಮಕ್ಕೂ ಒಂದು ತಿಂಗಳಾಗಿತ್ತು.
This is superrrrrrrrrrrrrrrrrrrb
October 13, 2009 at 7:18 am
ಒಂದೂರಲ್ಲಿ ಒಂದು ಹುಡುಗನಿದ್ದ. ಮದುವೆಯಾದ. ಒಂದು ತಿಂಗಳು ಹನಿಮೂನು ಮುಗಿಸಿಕೊಂಡುಬಂದ. ಅದೇ ಊರಿನಲ್ಲಿ ಒಂದು ಮುದ್ದಾದ ಹುಡುಗಿ.ಆ ಹುಡುಗಿಯ ಆತ್ಮಕ್ಕೂ ಒಂದು ತಿಂಗಳಾಗಿತ್ತು..
mana muttuva saalugalu…….
October 15, 2009 at 7:20 am
ಪ್ರೇಮಿಗಳು ಮದುವೆಯಾದರು.ಮದುವೆಯಾಗಲು ಕಾರಣರಾದ ಎಲ್ಲರನ್ನು ನೆನೆಸಿಕೊಂಡು ಕೃತಜ್ನತೆ ಅರ್ಪಿಸಿದರು. ಆದರೆ ಯಾಕೋ ನಾಲ್ಕೂ ಕಣ್ಣುಗಳು ಧಾರಾಕಾರವಾಗಿ ಅಳುತಿದ್ದವು.
A nalku kannu yardu anta gothaglila. premigalda? Heltera plz?