ಸತ್ತ ಬೇರು
ಚಿಗುರಿಬಿಟ್ಟಿದೆ !
ನೀನೆ ಬೇಡಿಕೊಂಡಿರಬೇಕು!
ಇಲ್ಲಾ ಮರದ ಮರೆಗೆ ನಿಂತು
ಹಾಡಿರಬೇಕು !

ನೀನು ನಿನ್ನೆ
ಹಾಡಿದ ಹಾಡಿಗೆ
ತೂಕ ಬಂದುಬಿಟ್ಟಿದೆ !

ನನ್ನ ಜೊತೆ
ಅವನಿಲ್ಲವಾದ ದಿನ
ಜಗತ್ತಿನ ಸಮಸ್ತ
ದೇವರುಗಳಿಗೆ ಒಂದಿಷ್ಟು
ಶಾಪಗಳು ಹೆಗಲೇರಲಿವೆ !

ಇಲ್ಲಿ ಒಂದು ಪಂದ್ಯ,
ತಾಕತ್ತಿದ್ದರೆ ಸಮಸ್ತ
ಸಾಗರಗಳು ಈ ಎದೆಯ
ಒಲವನ್ನ ತುಂಬಿಸಿಕೊಳ್ಳಲಿ

ಒಂದು ದಿನ
ನಿನ್ನೊಂದಿಗೆ
ಮಾತನಾಡಲಿಲ್ಲ!
ಜೀವನಪೂರ್ತಿ
ನಿನ್ನ ಜೊತೆಗಿರುವ
ಶಿಕ್ಷೆ ವಿಧಿಸಿಬಿಡು !

(ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)