ನಿಮ್ಮ ಭಾವನೆಗೆ ನನ್ನ ಕೆಲವೇ ಕೆಲವು ಪದಗಳು
ಇಲ್ಲಿರುವ ಯಾವುದೇ ಕವಿತೆಗಳಿಗೆ ಮತ್ತು ಹಾಳುಮೂಳು ಬರಹಗಳಿಗೆ ಒಂದು ದೃಷ್ಟಿಕೋನ ಒಂದು ಗುರಿ,ಧ್ಯೇಯ ಯಾವುದು ಇಲ್ಲ.ಇಲ್ಲಿರುವ ಪದಗಳಿಗೆ ಕವಿತೆ ಅನ್ನುವ ಚಂದದ ಹೆಸರಿನಿಂದ ಕರೆಯಬೇಕ? ಅದೂ ತೋಚುತ್ತಿಲ್ಲ.ಕೊನೆಗೆ ಈ ಪದಗಳ ಮೂಲಕ ನಾನು ಏನು ಹೇಳಲಿಕ್ಕೆ ಹೊರಟಿದ್ದೇನೆ ಅಂತ ಕೆಲವೊಂದು ಸಲ ನನಗೂ ಅರ್ಥವಾಗುವುದಿಲ್ಲ. ಇಲ್ಲಿರುವುದೆಲ್ಲ ಕೇವಲ ಹುಚ್ಚು ಮನಸ್ಸಿನ ಭೋರ್ಗರೆತಗಳು ಮಾತ್ರ. ಇವನ್ನ ಕವಿತೆ ಮತ್ತು ಅದ್ಭುತ ಬರಹ ಅಂತ ಓದುವ ನಿಮಗೆ ಮತ್ತು ನಿಮ್ಮ ಸಹನೆಗೆ ಮತ್ತು ಅತ್ಯಮೂಲ್ಯ ಸಮಯಕ್ಕೆ ನಾನು ಅಭಾರಿ…….ಮತ್ತೆ ಇಲ್ಲಿ ಕೆಲವೊಂದು ಸಲ ಕೆಲವು ಘಟನೆಗಳನ್ನ ನೆರವಾಗಿ ಹೇಳಬೇಕಾದ ಸಮಯದಲ್ಲಿ ಅನಿವಾರ್ಯವಾಗಿ ಅಸಂಬದ್ದ ಪದಗಳನ್ನ ಉಪಯೋಗಿಸಲೇ ಬೇಕಾಗುತ್ತದೆ ..ಮಡಿವಂತ ಮಹಾಶಯರು ನನ್ನ ಈ ಒಂದು ತಪ್ಪನ್ನ ಕ್ಷಮಿಸಿಬಿದಬೇಕು…….ಇಂತಿ ನಿಮ್ಮ ಪ್ರೀತಿಯ ನವಿಲುಗರಿ ಹುಡುಗ

Author Archive

ಒಂದು ಮನೆಯ ದೀಪವಾರಿದ ಕಥೆ…

April 20, 2008

ಅದೊಂದು ದೊಡ್ಡ ಸಂಸಾರ..೫ ಜನ ಅಣ್ಣತಮ್ಮಂದಿರು ಮತ್ತೆ ೪ ಅಕ್ಕ ತಂಗಿಯರು. ಹಾಗಂತ ಆನಂದ ಸಾಗರವೇನು ಅಲ್ಲ…ಕಿತ್ತಾಟ ಮುನಿಸು ಒಳಜಗಳಗಳು ಕೋಪ ಒಬ್ಬರನ್ನೊಬ್ಬರು ಹೀಯಾಳಿಸುವುದು ಅಣ್ಣತಮ್ಮಂದಿರಲ್ಲೆ ಕತ್ತಿ ಮಸೆಯುವುದು ಒಬ್ಬರನ್ನೊಬ್ಬರು ತುಳಿಯುವುದು ಮಾಮೂಲೆ..ಇಷ್ಟೆಲ್ಲ ಒಳಜಗಳಗಳಿದ್ದರೂ ಅ ಕುಟುಂಬ ಈ ತನಕ ಅವಿಭಕ್ತ ಕುಟುಂಬವಾಗಿದ್ದರ ಬಗ್ಗೆ ನನಗೆ ಅಭಿಮಾನ ಮತ್ತು ಆಶ್ಚರ್ಯ ಮತ್ತು ಒಂದು ತರನಾದ ನಿಗೂಢತೆ ಇನ್ನು ನನ್ನ ಮನಸ್ಸಿನಿಂದ ಮರೆಯಾಗಿಲ್ಲ..ಅವರು ಕಿತ್ತಾಡುತ್ತಿರುವುದರ ಹಿಂದೆ ಅವರು ಅನಕ್ಷರಸ್ತರಾದ ಒಂದು ಕಾರಣವಿರಬಹುದು ಮತ್ತು ಇಲ್ಲಿಯವರೆಗೆ ಆ ಮನೆಯು ಅವಿಭಕ್ತ [...]

ಭೂಮಿ ತೂಕದವಳು……………!!!!

April 20, 2008

ಇದ್ದಿದ್ದೆ ಒಂದು ಚಿಕ್ಕ ಗುಡಿಸಲು, ಗುಡಿಸಿಲ ಮೇಲೆ ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಇದೆಯೋ ಇಲ್ಲವೋ ಅನ್ನುವಷ್ಟು ಹುಲ್ಲು.ಈಗಲೋ ಆಗಲೋ ಧರೆಗುರುಳಲೂ ಸರತಿ ಸಾಲಿನಲ್ಲಿ ನಿಂತಿರುವ ಆ ಮನೆಯ ಬಿರುಕು ಬಿಟ್ಟ ಗೋಡೆಗಳು,ರಾತ್ರಿ ಮಳೆ ಬಂತೆಂದರೆ ಮನೆಯೊಳಗೆ ಈಜಾಡಬಹುದಾದಷ್ಟು ನೀರು ಮನೆಯ ಒಳಗೆ ಜಮಾವಣೆಯಾಗುತ್ತಿತ್ತು…ಇದ್ದ 3 ಜನಮಕ್ಕಳನ್ನು ರಾತ್ರಿ ಒಂದು ಬದಿಗೆ ಕೂರಿಸಿ ತಾನು ಮನೆಯ ಒಳಗಿದ್ದ ಅಷ್ಟೂ ನೀರನ್ನ ಹೊರಗೆ ಹಾಕಿ ಮಕ್ಕಳನ್ನೆಲ್ಲ ಹೇಗೋ ಮನೆಯ ಒಳಗೆ ಮಲಗಿಸಿ ತಾನು ತೂಕಡಿಸುತ್ತ ಮನೆಯ ಹೊರಗೆ ಕುಳಿತರೇ…”ಯಾವ ಮಿಂಡ [...]

ಒಂದು ಭಾನುವಾರದ ಕಥೆ

April 20, 2008

ಭಾನುವಾರ..! ವಾರಪುರ್ತಿ ಕಂಪ್ಯೂಟರ್ ಮುಂದೆ ಕುಳಿತು ಕುಟ್ಟಿದ್ದರ ಫ಼ಲವೇನೊ ಅನ್ನುವಂತೆ ಕುಂಭಕರ್ಣ ನಿದ್ರೆ.ಅವತ್ತಾದ್ರು ಪೂರ್ತಿ ಮಲಗಿ ಸೇಡುತೀರಿಸಿಕೊಳ್ಳಬೇಕೆಂದು ಎಲ್ಲೋ ಅನಾಥವಾಗಿ ಬಿದ್ದಿದ್ದ ಬೆಡ್ ಶೀಟ್ ಎಳೆದುಕೊಂಡು ಮತ್ತೆ ನಿದ್ರಾದೇವಿಗೆ ಶರಣಾಗಬೇಕು, ಅನ್ನುವಷ್ಟರಲ್ಲಿಯೇ “ಮಹಾಜನಗಳೇ ಮತಭಾಂಧವರೇ” ಅನ್ನುತ್ತ ಮೈಕಾಸೂರ ಅರಚಿಕ್ಕೊಳ್ಳತೊಡಗಿದ. ಅವನ ಆರ್ಭಟಕ್ಕೆ ನಿದ್ರಾದೇವಿ ಕೋಪಿಸಿಕೊಂಡು ನನ್ನಿಂದ ದೂರವಾದಳು.
ಮನಸ್ಸಿನಲ್ಲಿಯೇ ಮೈಕಾಸುರನಿಗೆ ಶಪಿಸುತ್ತ ಕೊಣೆಯ ಕಿಟಕಿ ತೆಗೆದುನೋಡಿದರೆ ಪಕ್ಕದಲ್ಲಿಯೆ ಯಾವುದೋ ಸಮಾರಂಭ ನಡೆಯುವ ಎಲ್ಲಾ ಸೂಚನೆಗಳಿದ್ದವು.ಅಲ್ಲಿ ಹಾಕಿರುವ ಕಟೌಟುಗಳನ್ನ ನೋಡಿದರೆ ಸಾಕಿತ್ತು ಯಾವುದೋ ರಾಜಕೀಯ ಸಮಾರಂಭ ಸದ್ಯದಲ್ಲೇ ಆರಂಬವಾಗಲಿದೆ [...]

ಚುಟುಕುಗಳು..!!

April 17, 2008

ಅವಳು
ಕನಸುಗಳಿಗೆ
ಕಾರಣಳಾದವಳು
ಕನಸೇ ಆಗಿ ಹೋದವಳು.
——————————-
ಜಾಣತನ
ನಿನ್ನ ತೋಳುಗಳ
ಬಲೆಗೆ ಬೀಳದೆ
ನನ್ನ ಪಿಯೂಸಿ
ಪಾಸುಮಾಡಿಕೊಂಡಿದ್ದು.
——————————-
ಮೂರ್ಖತನ
ನನ್ನ ಕತ್ತಲೆಗೆ
ಬೆಳಕ ನೀಡದ
ನಿನ್ನೆರೆಡು ಕಣ್ಣುಗಳನ್ನ
ಬೆಳಗುವ ದೀಪಗಳಿಗೆ
ಹೋಲಿಸಿ ಪದ್ಯ ಬರೆದಿದ್ದು.
——————————-
ಭಾವನೆಗಳು
ಹೃದಯವೆಂಬ
ತೋಟದಲ್ಲಿನ
ಸುಂದರ ಹೂವುಗಳು
——————————-
ನೀನೆಂದರೆ
ನನ್ನರ್ದ
ಕನಸುಗಳಿಗೆ
ಕಾರಣ..
ಇನ್ನರ್ದ
ನೋವುಗಳಿಗೆ
ಪ್ರೇರಣ.
——————————-
ನೆನಪು
ನನ್ನ ಸಕಲ
ನೊವು ನಿರಾಸೆಗಳಿಗೆ
ನಾನು ಕಂಡುಕೊಂಡ
ಔಷಧ.
——————————-
ಹಾರೈಕೆ
ಹೃದಯಗಳೇ
ನೀವು ಕಳೆದುಕೊಂಡ
ಒಲವೆಲ್ಲ
ಇಂದಲ್ಲ ನಾಳೆ
ಉಲ್ಕೆಗಳ ರೂಪದಲ್ಲಿ
ಸುರಿದು ಬರಲಿ.
——————————-
ತೃಪ್ತಿ
ನಲಿವೇ ಆಗಬೇಕೆಂದಿಲ್ಲ
ನಿನ್ನೊಲವಿನ
ನೋವಾದರೂ ಸಾಕು.
——————————-
ಮಾಯಗಾತಿ.
ಬೆಂಬಿಡದೆ ಕಾಡುತ್ತೇವೆಂದ
ಕಹಿ ಕನಸುಗಳಿಗೆ
ನಿನ್ನ ಒಲವ ಕುರಿತು ಹೇಳಿದೆ
ಪಾಪದ ಕನಸುಗಳು ಕೂಡ
ಕನವರಿಸುತ್ತಿವೆಯಂತೆ ನಿನ್ನ.
——————————-
ಸಾಮ್ಯತೆ.
ನೀನು ನನ್ನಿಂದ
ದೂರಾಗುತ್ತಿರುವುದಕ್ಕೂ
ನಾನು ಸಾವಿಗೆ
ಹತ್ತಿರವಾಗುತ್ತಿರುವುದಕ್ಕು
ಅಂತಹ ವ್ಯತ್ಯಾಸವೇನಿಲ್ಲ ಬಿಡು
——————————-
ಸಾಗರ.
ನಿನ್ನ ಒಲವು
ಮತ್ತು ಅದರ
ವಿಶಾಲತೆಯ ಮುಂದೆ
ಸೋತು ಸುಣ್ಣವಾಗಿದ್ದು.
——————————-
ಹೃದಯ.
ನಿನ್ನನ್ನ ಕಣ್ಣುಗಳಲ್ಲಿ
ತುಂಬಿಕೊಂಡ ದಿನ
ನಲಿದಾಡಿದ್ದು
ದೂರಾಗುತ್ತಲೇ ಅತ್ತು
ಗೋಳಾಡಿದ್ದು.
——————————-
ನಿಜ.
ಗಟ್ಟಿಯಾಗಿ ನಿನ್ನ
ಕೈ ಹಿಡಿದಿದ್ದು
ಆಸೆಯಿಂದಲ್ಲ..
ನನ್ನ ಬಿಟು ಹೋಗುತ್ತೇನೆಂದ
ನಿನ್ನ ಮೇಲಿನ ಬಯದಿಂದ.
——————————-
ಸುಳ್ಳು.
ನನ್ನ ಕನಸಿಗೆ ಪ್ರತಿ ದಿನ
ನೀನು ಬರುವುದೇ
ಇಲ್ಲವೆಂದು ಎದೆತಟ್ಟಿಕೊಂಡು
ನಾನು ಹೇಳಿದ್ದು.
——————————-
ದುರಂತ.
ನಾನು [...]

ಅಕ್ಕ ನಿಜವೇನೆ …!

March 10, 2008

ಸಂಜೆ ಮುಡಿದ ಮಲ್ಲಿಗೆ
ಮೆಲ್ಲಗೆ ಬಾಡಿದೆ,
ಹಣೆಯ ಕುಂಕುಮ
ಯಾರೋ ತೀಡಿದ ಹಾಗಿದೆ…
ಅಧರಾಮೃತದ ಬಟ್ಟಲು ಕಾಲಿ,
ನೋಡು ನಡೆಯುವಾಗಲು ಯಾಕಿಷ್ಟು ಜೋಲಿ….
ಕೆನ್ನೆ ಬೆಂಕಿಯ ಕೆನ್ನಾಲಿಗೆ!!
ನಿನ್ನ ಗಲ್ಲವೇನು ಬೆಲ್ಲದುಂಡೆಯ?
ಯಾಕಿಷ್ಟು ಗಾಯಾ…!
ಕೊರಳಬಳ್ಳಿಯಲ್ಯಾರು ಜೋಕಾಲಿ ಆಡಿದರು,
ಎದೆಯ ಹೊಲದೊಳಗ್ಯಾರು ಓಕುಳಿ ಹಚ್ಚಿದರು…
ಎದೆಯ ಇಳಿಜಾರಿನಲ್ಲಿ
ಸುಖದ ಹೂವೆನೆ,
ಮತ್ತೆ ಹಿತವಾದ ನೋವೇನೆ….
ಮುತ್ತಿನ ಮೂಗುತಿ ಎಲ್ಲಿ ಮರೆತೆಯೆ?
ಇಂತ ಬಂಗಾರದ ಮೈಯ್ಯಿಗೂ ಬಟ್ಟೆಯ ಕೊರತೆಯೆ…!!
ಸೆರಗಲ್ಲೇನು ಮಕ್ಕಳನ್ನಾಡಿಸುತ್ತಿದ್ದೆಯ?
ಕಣ್ಣುಗಳಲ್ಲಿ ಬೆಳದಿಂಗಳನ್ನೇ ಸುರಿದುಕೊಂಡಿದ್ದೀಯ….
ಬೆಳ್ಳಿ ಗೆಜ್ಜೆಗಳನ್ನೇನು ಗಿರವಿ ಇಟ್ಟೆಯ,
ಹಸಿರು ಬಳೆಗಳನ್ನ ಬೆಂಕಿಯಲ್ಲಿ ಸುಟ್ಟೆಯ…
ರೆಪ್ಪೆಗಳೇಕೆ ಕಾಡಿಗೆ ಬೇಡುತ್ತಿವೆ?
ನಿನ್ನ ತುಂಟ ಹೊಕ್ಕಳೇಕೆ ಎನೋ ಹೇಳುತ್ತಿದೆ…
ಅಕ್ಕಾ.. ನಿನ್ನ ಗುಟ್ಟುರಟ್ಟು ಮಾಡಿಬಿಟ್ಟೆ
ಮಜವೇನೆ? ಇಲ್ಲ ನನಗೆ ಸಜೆಯೇನೆ?..
ಅಕ್ಕಾ……ನಿಜವೇನೆ….

ಕೆಲವು ಬಯಕೆಗಳು……

February 28, 2008

ಹೂಳಿಟ್ಟ ಅಗಾಧ
ಆಸೆಗಳನ್ನ ಮತ್ತೆ
ಹೊರತೆಗೆದು
ಚಿಗುರೊಡೆಯುವಂತೆ
ಮಾಡಬೇಕಿದೆ………..
ಗಾಯಗೊಂಡ
ಎದೆಯ ಸೀಳಿ ಸೀಳಿ
ಮರಣಹೊಂದಿದ
ಕೆಲವು ನೆನಪುಗಳಿಗೆ
ಮತ್ತೆ ಜೀವ ಕೊಡಬೇಕಿದೆ…….
ನಡೆಯಬೇಕಾದ
ದಾರಿಯಲ್ಲಿರುವ
ಕೆಲವು ಮುಳ್ಳುಗಳಿಗೆ
ಹೂವಿನ ಸ್ನೇಹವ
ಮಾಡಿಸಬೇಕಿದೆ………………
ಎಲ್ಲಾ ಕಳೆದುಕೊಂಡ
ಈ ತೋಳುಗಳಿಗೆ
ತಬ್ಬಿಕೊಳ್ಳುವ
ಪರಿಯ ಹೇಳಬೇಕಿದೆ…………..
ನೀನಿಲ್ಲದ ನಿನ್ನೆಗಳಿಗೆ
ನೀನಿರುವ ನಾಳೆಯ
ನದಿತೀರದ ಸಂಜೆಗಳ
ಕುರಿತುಹೇಳಲೇಬೇಕಿದೆ………..
ಆಗುಂಬೆಯಂತಾಗಿದ್ದ
ಕಣ್ಣುಗಳಿಗೆ ಸ್ವಲ್ಪ
ಬೆಳದಿಂಗಳನ್ನು ತುಂಬಬೇಕಿದೆ………..
ಮಾತುಗಳಿಲ್ಲದೆ ಮೌನವಾಗಿದ್ದ
ತುಟಿಗಳಿಗೀಗ ಮತ್ತೆ ಬೀಗ
ಹಾಕಿಕೊಳ್ಳುವ ಕಲೆಯ ಕಲಿಸಬೆಕಿದೆ……….

ನೆನಪಿಗೆ ಬರಬಾರದು ನೀನು……

December 7, 2007

ಸಾದ್ಯವಾದಷ್ಟು ದೂರವೇ ಇರು
ಸಾದ್ಯವಾದರೆ ತೊಲಗು ನೀನು
ದಿಕ್ಕುಗಳೇ ಇರಬಾರದು ನಿನಗೆ
ದಾರಿಗಳೆಲ್ಲ ಚಕ್ರವ್ಯೂಹಗಳಾಗಬೇಕು
ಮತ್ತೆ ನನ್ನೊಳಗಿಳಿಯಲು ಹೊರಟೀಯ ಜೋಕೆ
ಈ ದಿನದಿಂದ ದೈವ ನನ್ನ ಜೊತೆಗಿದೆ ದ್ರೋಹಿ
ಇಷ್ಟು ದಿನ ನೀನು ನನ್ನ ಜೊತೆಗಿದ್ದ ಹಾಗೆ…!
ಸಾದ್ಯವಾದರೆ ಎರೆಡು ಹನಿ ಕಣ್ಣೀರು ಕೆಡಹು
ನನಗಾಗಿ ಅಲ್ಲ, ನನಗದು ಬೇಕಿಲ್ಲ
ನಿನ್ನ ಕಣ್ಣುಗಳಲ್ಲಿರುವ ಕೆಲವೇ ಕೆಲವು
ನನ್ನ ಕನಸುಗಳು ಈಚೆಗೆ ಬರಬೇಕಿದೆ,
ಮರುಭೂಮಿಯಲ್ಲಿ ಮಲ್ಲಿಗೆ ಬೆಳೆಯುವುದಿಲ್ಲವೆಂಬ
ಸತ್ಯವನ್ನ ನನ್ನ ಕನಸುಗಳಿಗೆ ನಾನು ಹೇಳಬೇಕಿದೆ…!
ಸಾದ್ಯವಾದರೆ ಮತ್ತೆ ನೀನು
ನನ್ನ ನೆನಪಿಗೆ ಬರಬಾರದು
ಈಗಷ್ಟೆ ಕನಸುಗಳ ದಫನ್ ಆಗಿದೆ ಇಲ್ಲಿ
ಮತ್ತೆ ಅವು ಚಿಗುರೊಡೆಯಬೇಕಲ್ಲವ?
ಚಿಗುರೊಡೆಯುವ ನನ್ನ ಕನಸುಗಳಿಗೆ
ನಾನು ಅಸುನೀಗಿದ ಕತೆಯ ಹೇಳಬೇಕಿದೆ..

ನಿನ್ನ ನೆನೆಯುತ್ತಾ….!

September 8, 2007

ಕಾದಿದ್ದೆ ಬಂತು
ಭೂಮಿಯಾಕಾಶಗಳ ಮದ್ಯೆ
ಮನಸ್ಸು ಶಬರಿಯಾಗಿಸಿಕೊಂಡು
ಇಲ್ಲದ ರಾಮನಿಗಾಗಿ……
ನಟ್ಟ ನಡುರಾತ್ರಿ ಎದ್ದು
ಹೋದ ಬುದ್ಧನಂತೆ ಹೋದೆಯಲ್ಲ
ನಾನು ಅನುಭವಿಸಿದ ನೋವು
ನಿರಾಶೆ ತಬ್ಬಲಿತನಗಳ ಲೆಕ್ಕ
ಕೇಳುವೆ ಕೊಡು ನೋಡುವಾ…
ಶುಭ್ರವಾಗಿತ್ತಲ್ಲವ ಮನದ ಕೊಳ
ಒಂದಷ್ಟು ದಿನದಲ್ಲಿ ಅದೆಷ್ಟು ನೀರು
ರಾಢಿಯಾಗಿದ್ದಕ್ಕೆ ಬೇಸರವಿಲ್ಲ
ಮತ್ತದೇ ನೀರು ತುಂಬಲು
ನಾನೆಷ್ಟು ನೀರು ಸುರಿಸಬೇಕು?
ಇಲ್ಲ ಇಂದಿನಿಂದ
ನನ್ನೊಳಗೆ ಯಾವ ಬೀಜವೂ
ಮೊಳಕೆಯೊಡೆಯುವುದಿಲ್ಲ..
ಆದರೂ ಬೆಳೆದು ಹೆಮ್ಮರವಾಗುವಂತಹ
ನನ್ನ ಅಗಾದ ಆಸೆಗಳಿಗೆ ಬಂಜೆತನ ಬಂದಿಲ್ಲ..
ಬತ್ತಿದೊಡಲು ತುಂಬುವುದಿಲ್ಲ
ಎದೆಯೊಳಗೆ ಹಾಲಿನ ನದಿ ಹರಿಯುವುದಿಲ್ಲ
ನಿನ್ನಪ್ಪುಗೆಯಾ ಮಾಯೆಯಲ್ಲಿ ದೇಹ ಮುರಿದು
ದಣಿದು ಬೆವರ ಹೊಳೆಹರಿಯುವುದಿಲ್ಲ…ಪಾಪಿ ನೀನು

ಕಣ್ಣುಗಳು……

July 10, 2007

ಮೇಘಗಳೇ ನೀವೆಷ್ಟು ಚಿಕ್ಕವರು
ನನ್ನ ಕಣ್ಣುಗಳ ಮುಂದೆ..
ನಾನು ಸುರಿಸಿದಷ್ಟು ಕಣ್ಣೀರು
ನೀವು ಸುರಿಸಲಿಲ್ಲ ನೀರು…!
ಎಷ್ಟು ವರ್ಶವಾಯಿತು ಗೆಳೆಯ
ಶಬರಿಯಂತೆ ಕಾದಿದ್ದು ನಾನಲ್ಲ
ನನ್ನ ಕಣ್ಣುಗಳು….ಬಯಕೆಯಿಂದ
ನೀ ನನ್ನ ಮೈ ಮುಟ್ಟಲೇ ಬೇಡ
ಬಾ ಮುತ್ತಿಡು ನನ್ನ ಕಂಗಳಿಗೆ…!
ನನಗೆ ಗೊತ್ತು ಮೋಸವಾಗಿದ್ದು
ನನಗೆ..ದುಃಖಿಸಿದ್ದು ನಾನಾದರೂ
ಬೋರ್ಗರೆದು ಅತ್ತಿದ್ದು ಮಾತ್ರ ಕಣ್ಣುಗಳು
ಒಂದು ಸಲ ನನ್ನ ಕಂಗಳ ಮೇಲೆ ನಿನ್ನ ಬೆರೆಳು..!
ಆಮೇಲೆ ಸತ್ತರು ಚಿಂತೆಯಿಲ್ಲ…ಕಣ್ಣುಗಳು ಮಾತ್ರ ನಿನ್ನವು…!
ಹೃದಯ ಸುಳ್ಳು ಹೇಳುವುದಿಲ್ಲವಂತೆ
ಹಾಗಾದರೆ ನನ್ನ ಕಣ್ಣುಗಳು ಯಾವತ್ತು?
ನೀನಾಡುವ ಒಂದು ಮಾತಿಗೆ ಜಾತಕ
ಪಕ್ಷಿಯ ಹಾಗೆ ಕಾತರಿಸಿದ್ದು ಕಿವಿಗಳಲ್ಲ ಕಣ್ಣುಗಳು….
ಅಲ್ಲಿರುವ ಬೆಳಕು ನೋಡಿಯು ನೀ ಅರಿಯಲಿಲ್ಲ…!
ನಾನಿಷ್ಟವಗಲಿಲ್ಲವ ಹೇಳು ಕಾರಣ [...]

ಚುಟುಕುಗಳು……….

July 8, 2007

ಮೀನುಗಾರನ ಬದುಕುವ ಛಲ
ಮತ್ತೆ ಮೀನಿನ ಬದುಕುವ ಹಠ
ಎರೆಡು ಪ್ರಾಮಾಣಿಕತೆಯಿಂದ
ಕೂಡಿದ್ದರ ಪ್ರತಿಬಿಂಬವೇನೋ
ಅನ್ನುವಂತೆ ಒಂದೋಂದು ಸಲ
ಮೀನಿಗೆ ಸೋಲು…
ಮಗದೊಂದು ಸಲ ಮೀನುಗಾರನ ಸಾವು…!!!!
_______________________________________
ಸಾಗಿಬಂದ ದಾರಿ ಏನೇನು ಅಲ್ಲ
ಸಾಗಬೇಕಾದ ದಾರಿ ತುಂಬಾ ಇದೆ
ಅನ್ನುವಾ ಭಾಷಣಕಾರರೇ..ನೋಡ ಬನ್ನಿ
ಅವಳಿಲ್ಲದೇ ಸಾಗಿ ಬಂದ ನನ್ನ ಪ್ರತೀ
ಹೆಜ್ಜೆಗಳು ಅನುಭವಿಸಿದ ಒಂಟಿತನವನ್ನ
ಜಗತ್ತಿಗೇ ಹಂಚಿ ಉಳಿಯುವಷ್ಟಿದೆ…
___________________________________________
ಪ್ರೀತಿ ಪ್ರೇಮ ಪ್ರಣಯ
ಸೊಗಸು ಕನಸು ಮನಸು
ಹೃದಯ ಅಂದ ಚೆಂದಗಳ
ಅರಮನೆಯಲ್ಲಿರುವ ನಿಮಗೆ
ವಾಸ್ತವದ ಅರಿವಾಗುವುದು
ಬದುಕೆಂಬ ಮಾಯಾವಿ
ವಾಸ್ತವದ ಛಡಿಯೇಟು ಕೊಟ್ಟಾಗಲೆ…………….
___________________________________________
ಬರೀ ಕಷ್ಟಗಳಿಗೆ ಹೆದರಿ
ನಿಂತಿರುವ ನೀನು…]
ಕೆಟ್ಟಾನುಕೆಟ್ಟ ಕೆಸರಿನಲ್ಲಿಯೂ
ಅರಳುತ್ತಿರುವ ಕಮಲದ ಹೂವಿನ
ಜೀವನೋತ್ಸಾಹವನ್ನು ಕಂಡು
ನಾಚಿ ತಲೆ ತಗ್ಗಿಸಲೇ ಬೇಕು….